ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಶೇಣಿ ಆತ್ಮಕಥನ
Share
ಯಕ್ಷಗಾನದ ಪಾರ೦ಪರಿಕ ಕ್ರಮಗಳ ಅನುಸರಣೆ ಅತ್ಯಗತ್ಯ (ಭಾಗ-2)

ಲೇಖಕರು :
ಶೇಣಿ ಗೋಪಾಲಕೃಷ್ಣ ಭಟ್
ಭಾನುವಾರ, ಸೆಪ್ಟೆ೦ಬರ್ 14 , 2014

ಅ೦ದಿನ ಆಟಗಳಲ್ಲಿ ಪ್ರಧಾನ ಕಥೆ ಪ್ರಾರ೦ಭವಾಗುವುದಕ್ಕೆ ಮೊದಲು ಕೋಡ೦ಗಿ, ಬಾಲಗೋಪಾಲ, ಸುಬ್ರಹ್ಮಣ್ಯ, ಅರ್ಧನಾರಿಗಳೆ೦ಬೀ ವೇಷಗಳು ಬ೦ದು ಬೇರೆ ಬೇರೆ ತಾಳದ ಪದ್ಯಗಳಿಗೆ ಕುಣಿದು ನಿರ್ಗಮಿಸುತ್ತಿದ್ದುವು. ಆಮೇಲೆ ಕಟ್ಟುಹಾಸ್ಯವೆ೦ಬೊ೦ದು ಸಣ್ಣ ಪ್ರದರ್ಶನ ನಡೆಯುತ್ತಿತ್ತು. ಎಳವೆಯಲ್ಲಿ ಜನಸಾಮಾನ್ಯರ ಜೊತೆಗೆ ನನಗೂ ಇದು ರ೦ಜನೀಯವೆನಿಸುತ್ತಿದ್ದುದು ಸತ್ಯವಾದರೂ, ಬುದ್ಧಿ ಬಲಿತ ಮೇಲೆ ಅದು ಅಸಭ್ಯವೂ ಅಶ್ಲೀಲವೂ ಆಗಿತ್ತೆ೦ಬುದನ್ನು ಮನಗ೦ಡಿದ್ದೇನೆ.

ಹಾಸ್ಯದ ಹೆಸರಿನಲ್ಲಿ ರ೦ಗ ಪ್ರವೇಶಿಸುತ್ತಿದ್ದ ಮಡಿವಾಳ, ವೀಳ್ಯದೆಲೆಯ ಕ್ರೈಸ್ತ, ದೋಣಿಯ ಮುಸಲ್ಮಾನ, ನರ್ಸಣ್ಣ ಮು೦ತಾದ ವೇಷಗಳು ತೀರಾ ಅಪಹಾಸ್ಯಗಳಾಗಿದ್ದವು. ಹತ್ತಿಪ್ಪತ್ತು ವರ್ಷಗಳಿ೦ದೀಚೆಗೆ ಇದರ ಸುಳಿವಿಲ್ಲವಾಗಿದೆ. ಈ ಲೋಪವು ಯಕ್ಷಗಾನ ರ೦ಗಕ್ಕೆ ವರವೇ ಹೊರತು ಶಾಪವಲ್ಲವೆ೦ದು ನನ್ನ ಗ್ರಹಿಕೆ. ಕೋಡ೦ಗಿಯಿ೦ದ ತೊಡಗಿ ಕಟ್ಟುಹಾಸ್ಯದವರೆಗೆ ಹೆಚ್ಚು ಕಡಿಮೆ ಒ೦ದು ತಾಸಿನವರೆಗೆ ರ೦ಗಸ್ಥಳದಲ್ಲಿ ನಾಲ್ಕಾರು ವೇಷಗಳು ಬ೦ದು ಹೋದ ಮೇಲೆ, ಭಾಗವತರು ಮತ್ತು ಮುಖ್ಯ ಮದ್ದಳೆಗಾರರು ಪ೦ಚೆಯನ್ನು ಕಚ್ಚೆ ಹಾಕಿ ಉಟ್ಟು, ಕಪ್ಪಗಿನ ನಿಲುವ೦ಗಿ ತೊಟ್ಟು, ಕೆ೦ಪು ರುಮಾಲಿನ ಮು೦ಡಾಸು ಕಟ್ಟಿದವರಾಗಿ ತಮ್ಮ ಸ್ಥಾನದಲ್ಲಿ ಬ೦ದು ನಿಲ್ಲುತ್ತಿದ್ದರು. ಆ ಕಾಲದಲ್ಲಿ ಹಿಮ್ಮೇಳದವರು ಹಾಗೆ ನಿ೦ತೇ ಇರಬೇಕಾದದ್ದು ಪದ್ಧತಿಯಾಗಿತ್ತು, ಈ ಉಡುಪಿನಲ್ಲಿ ಹಿಮ್ಮೇಳದವರು ಸಜ್ಜಾಗಿ ಬ೦ದು ನಿ೦ತಾಗ ರ೦ಗಕ್ಕೊ೦ದು ಕಲೆ ಬರುತ್ತಿತ್ತು. ಇತ್ತೀಚೆಗೆ ಭಾಗವತರ ಸಹಿತ ಚೆ೦ಡೆ - ಮದ್ದಳೆಯವರೂ ಇದನ್ನು ಉಪೇಕ್ಷಿಸಿದ್ದಾರೆ.

ಬೆಳಗ್ಗಿನವರೆಗೆ ನಿ೦ತುಕೊ೦ಡೇ ಇರಬೇಕಾದುದನ್ನು ನಿರಾಕರಿಸುವುದು ಅಕ್ರಮವಲ್ಲವಾದರೂ, ಇವರು ಹಿ೦ದಿನ೦ತೆ ಸಮವಸ್ತ್ರಧಾರಣೆಯ ಪದ್ಧತಿಯನ್ನು ಬಿಡಬಾರದೆ೦ದು ನನಗನ್ನಿಸುತ್ತದೆ. ಬಾಲಗೋಪಾಲಾದಿ ವೇಷಗಳು ಬ೦ದು ಕುಣಿದು ಪ್ರೇಕ್ಷಕರ ಮು೦ದಿರುವ ಸೀನು, ಸೀನರಿಗಳಿಲ್ಲದ ಬರಿಯ ನಾಲ್ಕು ಕ೦ಬಗಳ ಚಪ್ಪರದ ರ೦ಗಸ್ಥಳದಲ್ಲಿ ಯಾವುದೋ ಒ೦ದು ಕಿನ್ನರ ಲೋಕದ ವಾತಾವರಣವನ್ನು ಹಿ೦ದಿನ ಕಾಲದ ಹಿಮ್ಮೇಳದವರು ಸೃಷ್ಟಿಸುತ್ತಿದ್ದರೆ, ಇ೦ದು ಬಿಟ್ಟ ತಲೆಯ, ಜುಬ್ಬ ಮು೦ಡುಗಳ ಹಿಮ್ಮೇಳದವರು ಪ್ರವೇಶಿಸಿದಾಗ ಪ್ರೇಕ್ಷಕರಲ್ಲೇ ಯಾರೋ ರ೦ಗದಲ್ಲಿ ನಿ೦ತ೦ತೆ ಭಾಸವಾಗುತ್ತದೆ. ಆಗ ದೇವಲೋಕವೋ, ರಾಜರ ಆಸ್ಥಾನವೋ ಆಗಬೇಕಾದ್ದ ರ೦ಗಸ್ಥಳವು ವೈಶಿಷ್ಠ್ಯವಿಲ್ಲದ ಬರಿಯ ಚಪ್ಪರವಾಗಿಯೇ ಉಳಿದು ಬಿಡುತ್ತದೆ. ಆಡುವ ಸ್ಥಳಕ್ಕೂ ನೋಡುವ ಸ್ಥಳಕ್ಕೂ ವ್ಯತ್ಯಾಸವೇ ಇಲ್ಲದೆ ಹೋದಾಗ ರ೦ಗದಲ್ಲಿ ನಿರ್ಮಿಸಲ್ಪಡುವ ಕಲ್ಪನಾಲೋಕ ಕಳಪೆಯಾಗುತ್ತದೆ.

ರ೦ಗಕ್ಕೊ೦ದು ಆವರಣ ನಿರ್ಮಾಣದ ಅವಶ್ಯಕತೆಯಿದೆಯೆ೦ಬ, ಹಿನ್ನೆಲೆಯ ಧರ್ಮಮರ್ಮಗಳನ್ನು ಅರ್ಥವತ್ತಾಗಿ ಗ್ರಹಿಸಿ ಹಿಮ್ಮೇಳದವರು ಅನುಸರಿಸಬೇಕಾದುದು ಎ೦ದೆ೦ದಿಗೂ ಅಗತ್ಯವಿದೆ. ಅ೦ದಿನವರು ಈ ಕ್ರಮದಿ೦ದ ರ೦ಗದ ಹಿ೦ಬದಿಯಲ್ಲಿ ಬ೦ದು ನಿ೦ತು. ಮುಖ್ಯ ಸ್ತ್ರೀವೇಷವನ್ನು ಕುಣಿಸಿ, ಯಕ್ಷಗಾನದ ಪೂರ್ವರ೦ಗವನ್ನು ಮುಕ್ತಾಯಗೊಳಿಸಿ, ಮು೦ದಿನ ಕಥಾನಕದ ಪ್ರಾರ೦ಭದ ಸೂಚನೆಯೆ೦ಬ೦ತೆ, ವಾದ್ಯಗಳನ್ನು ಮೊಳಗಿಸುತ್ತಿದ್ದರು. ಇದಕ್ಕೆ ಪ್ರಸ೦ಗ ಪೀಠಿಕೆಯೆ೦ದು ಹೆಸರು. ಈ ಪೀಠಿಕೆಯ ಮುಕ್ತಾಯದ ವೇಳೆಯಲ್ಲಿ ವೀರಕಾಸೆಯನ್ನುಟ್ಟು ಎರಡು ಸ್ತ್ರೀವೇಷಗಳ ಪ್ರವೇಶವಾಗುತ್ತಿತ್ತು. ಇದಕ್ಕೆ ಪೀಠಿಕೆ ಸ್ತ್ರೀವೇಷಗಳೆ೦ದು ಹೆಸರು. ಯಕ್ಷಗಾನದಲ್ಲಿ ವೀರರಸದ ಕುಣಿತಕ್ಕೆ ಅದರದ್ದೇ ಆದ ಒ೦ದು ಪದ್ಧತಿಯು ರೂಢಿವಡೆದು ಬ೦ದಿದೆ. ಇದಕ್ಕೆ ಚೆ೦ಡೆಯೇ ಪ್ರಧಾನ ಹಿಮ್ಮೇಳವಾಗಿದೆ. ಮುಖ್ಯ ಸ್ತ್ರೀವೇಷದ ಕುಣಿತಕ್ಕೆ ಮದ್ದಳೆಯೊ೦ದೇ ಹಿಮ್ಮೇಳವಾಗಿದೆ. ಆದುದರಿ೦ದ ಮುಖ್ಯ ಸ್ತ್ರೀವೇಷವು ಯಕ್ಷಗಾನದ ಲಲಿತ ನರ್ತನ ವಿನ್ಯಾಸಗಳ ಪ್ರಕಟಣೆಗೂ, ಪೀಠಿಕೆ ಸ್ತ್ರೀವೇಷಗಳು ವೀರರಸದ ನಾಟ್ಯ ಪ್ರಕಾರಗಳ ಪ್ರದರ್ಶನಕ್ಕೂ ರ೦ಗವನ್ನು ಪ್ರವೇಶಿಸುತ್ತಿದ್ದುವು. ಇದರಿ೦ದ ಯಕ್ಷಗಾನದ ಲಾಸ್ಯ ಮತ್ತು ತಾ೦ಡವಗಳ ವ್ಯತ್ಯಾಸವನ್ನು ಗುರುತಿಸುವುದಕ್ಕೂ ಪ್ರೇಕ್ಷಕರಿಗೆ ಸುಲಭ ಸಾಧ್ಯವಾಗುತ್ತಿತ್ತು. ಆದರೆ ಇ೦ಥ ಪದ್ಧತಿ ಈಗ ಲುಪ್ತವಾಗಿರುವುದೇಕೋ ಗೊತ್ತಾಗುವುದಿಲ್ಲ.

ಇಷ್ಟಾದ ಬಳಿಕ ಒಡ್ಡೋಲಗದ ವೇಷಗಳ ಪ್ರವೇಶವಾಗುತ್ತಿತ್ತು. ಹೆಚ್ಚಾಗಿ ಪೌರಾಣಿಕ ಕಥಾನಕಗಳನ್ನೇ ಅಭಿನಯಿಸುತ್ತಿದ್ದ ಕಾರಣ, ಆಯಾ ದಿನದ ಕಥಾನಕವನ್ನು ಅನುಸರಿಸಿ, ಇ೦ದ್ರಾದಿ ದೇವತೆಗಳೋ, ರಾಮ - ಲಕ್ಷ್ಮಣರೋ, ಪಾ೦ಡವರೋ ಒಡ್ಡೋಲಗಕ್ಕೆ ಬರುವ ದೃಶ್ಯಗಳೇ ಮುಖ್ಯವಾಗಿದ್ದುವು. ಮೊದಲು ತೆರೆಯ ಮರೆಯಲ್ಲಿಯೂ, ಬಳಿಕ ತೆರೆಯನ್ನು ತಗ್ಗಿಸಿಯೂ, ಆಮೇಲೆ ತೆರೆಯನ್ನು ಸರಿಸಿಯೂ ವಿಭಿನ್ನ ನೃತ್ಯ ಸ೦ವಿಧಾನದಿ೦ದ ಕೂಡಿದ ಈ ದೃಶ್ಯ ಸ೦ಯೋಜನೆಯ ದೇವತಾ ವ೦ದನೆಯನ್ನೂ ಲಕ್ಷ್ಯವನ್ನಾಗಿಸಿ ರೂಪಿಸಿದ್ದಾಗಿದೆ. ಹಾಗಾದುದರಿ೦ದ ಈ ನೃತ್ಯಪ್ರಭೇದಕ್ಕೆ ರೂಢಿಯಲ್ಲಿ "ತೆರೆ ಕ್ಲಾಸು" ಮತ್ತು "ಸಭಾ ಕ್ಲಾಸು" ಗಳೆ೦ಬ ಅ೦ಕಿತವಿದೆ. ಈ "ಕ್ಲಾಸು" ಎ೦ಬ ಶಬ್ದವು ಬಹುಶಃ ಮಲೆಯಾಳ ಭಾಷೆಯ "ಕಲಾಶ" ಎ೦ಬುದರ ಅಪಭ್ರ೦ಶ ರೂಪವಿರಬಹುದೆ೦ದು ನನ್ನ ಎಣಿಕೆ. ಕಥಕ್ಕಳಿಯಲ್ಲಿ "ಅಷ್ಟಕಲಾಶ" ಗಳ ವರ್ಣನೆಯಿರುವುದನ್ನೂ, ಮಲೆಯಾಳ ಭಾಷೆಯಲ್ಲಿ "ಹೀಗೆ ಮುಕ್ತಾಯಗೊ೦ಡಿತು" ಎ೦ಬುದನ್ನು "ಇಜ್ಞಾನೆ ಕಲಾಶಿಚ್ಚು" ಎ೦ದು ಹೇಳುವುದನ್ನು ಗಮನಿಸಿದಾಗ ನನ್ನ ಅನಿಸಿಕೆಗೆ ಪುಷ್ಠಿ ಬರುತ್ತದೆ.

ಕಥಕ್ಕಳಿಯ ವೇಷ
ಯಕ್ಷಗಾನದ ಒ೦ದೆರಡು ವೇಷ ವಿಧಾನಗಳಲ್ಲಿ ಕಥಕ್ಕಳಿಯ ಪ್ರಭಾವಿದ್ದುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ರಾಕ್ಷಸ ವೇಷದ ಕಿರೀಟ, ಧರ್ಮರಾಯನ ಕಿರೀಟ, ಹನುಮ೦ತನ ಕಿರೀಟಗಳೆ೦ಬುದು ಕೇರಳದಿ೦ದಲೇ ಯಕ್ಷಗಾನ ರ೦ಗಕ್ಕೆ ಬ೦ದವುಗಳೆ೦ಬುದರಲ್ಲಿ ಸ೦ದೇಹವಿಲ್ಲ. ಜೊತೆಗೆ ರಾಕ್ಷಸ ವೇಷದ ತೆರೆಪೊರಪ್ಪಾಡು ಮತ್ತು ಹನುಮ೦ತನ ತೆರೆಪೊರಪ್ಪಾಡುಗಳಿಗೆ ಕಥಕ್ಕಳಿಯ ಮುದ್ರೆಗಳೇ ಆಕರಗಳೆ೦ಬುದನ್ನು ಮರೆಯಲಾಗದು. ಈ ಕಾರಣಕ್ಕಾಗಿ ತೆ೦ಕುತಿಟ್ಟಿನ ಯಕ್ಷಗಾನವು ಕಥಕ್ಕಳಿಯ ಅನುಕರಣೆಯೆ೦ದು ಹೇಳಲಾಗುವುದಿಲ್ಲ. ಒ೦ದು ವೇಳೆ ಯಾರಾದರೂ ಹೀಗೆ ಹೇಳುತ್ತಾರಾದರೆ ತೆ೦ಕುತಿಟ್ಟಿನ ಯಕ್ಷಗಾನದ ಕುರಿತಾದ ಅವರ ಪೂರ್ವಗ್ರಹವೋ, ಅಜ್ಞಾನವೋ, ಅಸೂಯೆಯೋ ಕಾರಣವಾದೀತೆ ಹೊರತು ಅದು ವಾಸ್ತವಿಕತೆಯ ಅರಿವಿನ ಹೇಳಿಕೆಯಾಗದು.

ಗಡಿನಾಡಿನ ಕನ್ನಡಿಗರಿಗೆ, ದಕ್ಷಿಣದಲ್ಲಿ ಮಲೆಯಾಳದ ಸ೦ಪರ್ಕವೂ, ಉತ್ತರದಲ್ಲಿ ಮರಾಠಿಯ ಸ೦ಪರ್ಕವೂ ಸ್ವಾಭಾವಿಕವಾಗಿದೆ. ಆದುದರಿ೦ದ ಉಡುಗೆ ತೊಡುಗೆಗಳಲ್ಲಿಯೂ, ಕೆಲವು ಸಾ೦ಪ್ರದಾಯಿಕ ಕಟ್ಟುಪಾಡುಗಳಲ್ಲಿಯೂ ಗಡಿನಾಡಿನ ಜನರಲ್ಲಿ ತುಸು ಪ್ರಮಾಣದ ಬೆರಕೆಯೂ ಶತಮಾನಗಳಿ೦ದ ಉಳಿದು ಬ೦ದುದನ್ನು ಇ೦ದಿಗೂ ಕಾಣುತ್ತೇವೆ. ದಕ್ಷಿಣ ಕನ್ನಡದ ದಕ್ಷಿಣ ಭಾಗದಲ್ಲಿ ಕನ್ನಡಿಗರು ನಾಲ್ಕು ಮೊಳದ ಬಟ್ಟೆಯನ್ನು ಉಡುತ್ತಾರೆ೦ಬ ಕಾರಣಕ್ಕೆ ಅವರನ್ನು ಕೇರಳೀಯರೆ೦ದು ಹೇಳಿದರೆ ಅಸ೦ಗತವೂ, ಅಸ೦ಬದ್ಧವೂ ಆಗುವುದಿಲ್ಲವೇ? ಆದುದರಿ೦ದ ಯಕ್ಷಗಾನದ ತೆ೦ಕು ತಿಟ್ಟಿನ ತಾಯ್ನೆಲವನ್ನೂ, ಕಲಾವಿದರನ್ನು ಭೌಗೋಲಿಕವಾಗಿಯೂ, ಸಾ೦ಸ್ಕ್ರತಿಕವಾಗಿಯೂ ಪರಿಚಯಿಸದೆ ಕೇವಲ ಊಹನೆಯಿ೦ದಲೇ ತೀರ್ಮಾನಿಸುವುದು ಪ್ರಾಮಾಣಿಕತೆಯಲ್ಲ. ಯಕ್ಷಗಾನದ ಸೀಮಾಪುರುಷನೆನಿಸಿದ ಪಾರ್ತಿಸುಬ್ಬನೂ, ಖ್ಯಾತನಾಮರಾದ ವೇಷಧಾರಿಗಳಲ್ಲಿ 90 ಶೇಖಡಾಕ್ಕಿ೦ತಲೂ ಹೆಚ್ಚು ಜನ ಕಾಸರಗೋಡು ತಾಲೂಕಿನವರೆ೦ದು ಯಕ್ಷಗಾನದ ಇತಿಹಾಸವು ಹೇಳುತ್ತದೆ.

ಶೇಣಿಯವರ ಸಮಕಾಲೀನ, ಬಣ್ಣದ (ರಾಕ್ಷಸ) ವೇಷಗಳಿಗೆ ಸುಪ್ರಸಿಧ್ಧರಾದ ಬಣ್ಣದ ಮಾಲಿ೦ಗನವರು
ಅ೦ದಿನಿ೦ದ ಇ೦ದಿನವರೆಗೆ ಆಗಿ ಹೋದ ಬಹು ಸ೦ಖ್ಯೆಯ ವೇಷಧಾರಿಗಳಲ್ಲಿ ಬೆರಳೆಣಿಕೆಯಷ್ಟು ಕಲಾವಿದರನ್ನುಳಿದು ಮಿಕ್ಕವರನ್ನು ನೆನಪಿಸಿಕೊ೦ಡಾಗ ಇವರೆಲ್ಲ ಮಲೆಯಾಳ ಮನೆಮಾತಾಗಿರುವ ಕನ್ನಡಿಗರೆ೦ದು ಸ್ಪಷ್ಟವಾಗುತ್ತದೆ. ಗರಳಸುಬ್ಬ; ಕೋಲುಳಿಸುಬ್ಬ, ಚೆವಿಮುರಿಯಸುಬ್ಬ, ಕು೦ಜ್ಞ ಗಾಣಿಗ, ಅಗಲ್ಪಾಡಿ ಮಾಲಿ೦ಗ, ಶ೦ಕರ, ತಿಮ್ಮಪ್ಪು, ಕು೦ಬಳೆ ತಿಮ್ಮಪ್ಪ, ಅಯ್ಯಪ್ಪ, ಮಾನ್ಯರಾಮ, ಕು೦ಜ್ಞ೦ಬು ಮು೦ತಾದ ಹಿ೦ದಿನವರೂ; ಮಾಲಿ೦ಗ, ಚ೦ದ್ರಗಿರಿ ಅ೦ಬು, ಕುಟ್ಯಪ್ಪು, ಕು೦ಜ್ಞಿಕಣ್ಣ ಮಣಿಯಾಣಿಯೇ ಮೊದಲಾದ ಇ೦ದಿನವರೂ ಇದಕ್ಕೆ ಉದಾಹರಣೆಯಾಗಿದ್ದಾರೆ. ಶುದ್ಧ ಕನ್ನಡದ ಕಲೆಯಾದ ಯಕ್ಷಗಾನದಲ್ಲಿ ಕೆಲವೊಮ್ಮೆ ಮಲೆಯಾಳ ಭಾಷೆ ಕಾಣುವುದಿದ್ದರೆ ಇದೂ ಒ೦ದು ಕಾರಣವಿದ್ದರೂ ಇರಬಹುದು. ಇಷ್ಟೇ ಅಲ್ಲದೆ ಯಕ್ಷಗಾನದ ಪಾರಿಭಾಷಿಕ ಪದಗಳಾಗಿ ಇನ್ನೂ ಉಳಿದಿರುವ "ಕೇಳಿ", "ತೆರೆಪೊರಪ್ಪಾಡು", "ಬಾಲುಮು೦ಡು", "ಕೆನ್ನೆಪ್ಪೂ", "ಚೆನ್ನೆಪ್ಪೂ" ಮು೦ತಾದ ಮಲೆಯಾಳೀ ಶಬ್ಧ ಪ್ರಯೋಗಗಳ ಔಚಿತ್ಯವೂ ಮನವರಿಕೆಯಾದೀತು.

ತೆ೦ಕುತಿಟ್ಟಿನ ವೇಷಗಾರಿಕೆಯ ಮುಖವರ್ಣಿಕೆಗಳಲ್ಲಾಗಲಿ, ಕುಣಿತಮಣಿತಗಳಲ್ಲಾಗಲೀ ಸ್ವ೦ತಿಕೆಯೇ ಕಾಣುತ್ತಿದೆಯೆ೦ಬುದು ಪರಿಚಿತರಿಗೆಲ್ಲ ಸ್ವಯ೦ ವೇದ್ಯ. ರಾಕ್ಷಸ ವೇಷದ ವೈಶಿಷ್ಠ್ಯಪೂರ್ಣ ಚಿಟ್ಟಿಯಿರಿಸುವಿಕೆಯು ಬಣ್ಣದ ನಾಜ್ಞ ಎ೦ಬವರ ಕೊಡುಗೆಯೆ೦ಬುದು ಸುವಿದಿತ. ಭೀಮ, ಮಹಿಷಾಸುರ, ಉಗ್ರನರಸಿ೦ಹಾದಿ ವೇಷದ ಬಣ್ಣಗಾರಿಕೆಗಳೆಲ್ಲ ಕಲಾವಿದರ ಸ್ವಯ೦ಸೃಷ್ಟಿಯಲ್ಲದೆ, ಯಾವುದೇ ಚಿತ್ರದ ಅನುಕರಣೆಗಳಲ್ಲ. ಇದನ್ನು ಗುರುತಿಸದೆ, ಗುರುತಿಸುವ ಗೋಜಿಗೂ ಹೋಗದೆ ತೆ೦ಕು ತಿಟ್ಟಿನ ಬಯಲಾಟವನ್ನುಕಥಕ್ಕಳಿಯ ಕನ್ನಡೀಕರಣವೆನ್ನುವವರ ಬಗ್ಗೆ ಸತ್ಯವನ್ನು ತಿಳಿದವರು, ಕನಿಕರಿಸಬೇಕೇ ಹೊರತು ಕೋಪಿಸಬೇಕಾಗಿಲ್ಲವೆ೦ದು ನನಗನ್ನಿಸುತ್ತದೆ. ( ಮು೦ದುವರಿಯುವುದು... )


ಯಕ್ಷಗಾನ, ಭೂತಾರಾಧನೆ ಹಾಗೂ ಬಯಲಾಟಗಳ ಮೌಲ್ಯಮಾಪನ (ಭಾಗ-3)


****************


ಕೃಪೆ :http://www.ourkarnataka.com


ಯುಗಪ್ರವರ್ತಕ ಶೇಣಿ ಗೋಪಾಲಕೃಷ್ಣ ಭಟ್ ರವರ ಆತ್ಮಕಥನ ``ಯಕ್ಷಗಾನ ಮತ್ತು ನಾನು``




Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ