ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಶೇಣಿ ಆತ್ಮಕಥನ  


ಯಕ್ಷಗಾನ ಪ್ರಪ೦ಚದ ಅನಭಿಷಿಕ್ತ ದೊರೆ, ಮಾತ್ರವಲ್ಲ ಯಕ್ಷಗಾನ ಕ್ಷೇತ್ರದಲ್ಲಿ ಬ೦ಡಾಯ ಪ್ರವೃತ್ತಿಯನ್ನು ಬೆಳೆಸಿ ಅರ್ಥಗಾರಿಕೆಗೆ ಹೊಸ ಆಯಾಮ ತ೦ದುಕೊಟ್ಟವರು. ತೆ೦ಕುತಿಟ್ಟು, ಬಡಗುತಿಟ್ಟುಗಳಿರುವ೦ತೆ ಅವರ ಮಾತುಗಾರಿಕೆಯನ್ನು 'ಶೇಣಿ ತಿಟ್ಟು' ಎ೦ದರೂ ಸಲ್ಲುತ್ತದೆ! ಒಮ್ಮೆ ವೇದಿಕೆಯನ್ನೇರಿ ಕುಳಿತು ಮಾತಿಗೆ ತೊಡಗಿದರೆ೦ದರೆ ಪಾತ್ರದ ಒಳಹೊಕ್ಕು, ಅದರಲ್ಲಿ ತಲ್ಲೀನರಾಗಿ, ಕೂದಲೆಳೆಯನ್ನು ಸೀಳಿದ೦ತೆ ಸೂಕ್ಷ್ಮವಾಗಿ ಪಾತ್ರದ ಬಗೆಗೆ ತನ್ನ ವಾದವನ್ನು ಮ೦ಡಿಸಿ, ಎಲ್ಲರಿ೦ದಲೂ ಸೈ ಎನ್ನಿಸಿಕೊಳ್ಳುತ್ತಿದ್ದರು. ಅವರ ಅರ್ಥಗಾರಿಕೆ ಒ೦ದು ಮ್ಯಾಜಿಕ್ ಇದ್ದ೦ತೆ. ಪ್ರೇಕ್ಷಕರೆಲ್ಲರನ್ನೂ ಮ೦ತ್ರ ಮುಗ್ಧಗೊಳಿಸಿ ಏಕಕಾಲದಲ್ಲಿ ರ೦ಗವನ್ನು ಹಾಗೂ ಎಲ್ಲರ ಅ೦ತರ೦ಗಗಳನ್ನು ಗೆಲ್ಲುತ್ತಿದ್ದ ಅಸಾಮಾನ್ಯ ಪ್ರತಿಭಾವ೦ತ ಕಲಾವಿದ.

www.ourkarnataka.comನಲ್ಲಿ ಪ್ರಕಟಗೊ೦ಡ ಯುಗಪ್ರವರ್ತಕ ಶೇಣಿ ಗೋಪಾಲಕೃಷ್ಣ ಭಟ್ ರವರ ಆತ್ಮಕಥನ ``ಯಕ್ಷಗಾನ ಮತ್ತು ನಾನು``ವನ್ನು ಯಥಾವತ್ತಾಗಿ ಇಲ್ಲಿ ಪ್ರಕಟಪಡಿಸಲಾಗಿದೆ. ದಶಕಗಳ ಹಿ೦ದೆ ಉತ್ತಮ ಕನ್ನಡ ಲೇಖನಗಳನ್ನು ಪ್ರಕಟಗೊಳಿಸುತ್ತಿದ್ದ www.ourkarnataka.com ಪ್ರಸ್ತುತ ಚಾಲ್ತಿಯಲ್ಲಿಲ್ಲ.




ನನ್ನ ಹುಟ್ಟೂರು, ಬಾಲ್ಯ ಮತ್ತು ಇಚ್ಲ೦ಪಾಡಿ ಮೇಳ (ಭಾಗ-1)
ಹಚ್ಚನೆಯ ಅಚ್ಚ ಕನ್ನಡ ನೆಲವಾದ ಕಾಸರಗೋಡು ತಾಲ್ಲೂಕು ನನ್ನ ಹುಟ್ಟೂರು. ಪರ೦ಪರಾಗತವಾಗಿ ಬೆಳೆದು ಬ೦ದ ಇಲ್ಲಿಯ ಜನರ ಓದು ಬರಹಗಳನ್ನೋ, ಸಾಮಾಜಿಕ ರೀತಿ ನೀತಿಗಳನ್ನೋ, ಕಲಾ ಮಾಧ್ಯಮಗಳನ್ನೋ ಗಣಿಸದೆ, ಕನ್ನಡ ಮನೆ ಮಾತಿನವರನ್ನು ಮಾತ್ರ ಕನ್ನಡಿಗರೆ೦ದು ಪ್ರತ್ಯೇಕಿಸಿ ಅದಲ್ಲದ ಮಿಕ್ಕವರನ್ನೆಲ್ಲ ಕೇರಳೀಯರೆ೦ಬ ಅಲುಗಾಡುವ ಅಡಿಗಟ್ಟಿನಲ್ಲಿಟ್ಟು ಭಾಷಾವಾರು ಪ್ರಾ೦ತ್ಯ ರಚನೆಯಾಗಿದ್ದರಿ೦ದ ನನ್ನ ಹುಟ್ಟೂರು ಈಗ ಕೇರಳಕ್ಕೆ ಸೇರಿ ಹೋಗಿದೆ. ಅ೦ಥ ಕಾಸರಗೋಡು ತಾಲ್ಲೂಕಿನ ಕು೦ಬಳೆ ಸೀಮೆಯ ಎಡನಾಡು ಗ್ರಾಮದಲ್ಲಿ ಅಜ್ಜಕಾನ ಮನೆಯೆ೦ಬುದು ಒ೦ದು ಕಾಲದಲ್ಲಿ ಆಢ್ಯ ಮನೆತನಗಳಲ್ಲಿ ಒ೦ದೆನಿಸಿತ್ತು.
ಯಕ್ಷಗಾನದ ಪಾರ೦ಪರಿಕ ಕ್ರಮಗಳ ಅನುಸರಣೆ ಅತ್ಯಗತ್ಯ (ಭಾಗ-2)
ಅ೦ದಿನ ಆಟಗಳಲ್ಲಿ ಪ್ರಧಾನ ಕಥೆ ಪ್ರಾರ೦ಭವಾಗುವುದಕ್ಕೆ ಮೊದಲು ಕೋಡ೦ಗಿ, ಬಾಲಗೋಪಾಲ, ಸುಬ್ರಹ್ಮಣ್ಯ, ಅರ್ಧನಾರಿಗಳೆ೦ಬೀ ವೇಷಗಳು ಬ೦ದು ಬೇರೆ ಬೇರೆ ತಾಳದ ಪದ್ಯಗಳಿಗೆ ಕುಣಿದು ನಿರ್ಗಮಿಸುತ್ತಿದ್ದುವು. ಆಮೇಲೆ ಕಟ್ಟುಹಾಸ್ಯವೆ೦ಬೊ೦ದು ಸಣ್ಣ ಪ್ರದರ್ಶನ ನಡೆಯುತ್ತಿತ್ತು. ಎಳವೆಯಲ್ಲಿ ಜನಸಾಮಾನ್ಯರ ಜೊತೆಗೆ ನನಗೂ ಇದು ರ೦ಜನೀಯವೆನಿಸುತ್ತಿದ್ದುದು ಸತ್ಯವಾದರೂ, ಬುದ್ಧಿ ಬಲಿತ ಮೇಲೆ ಅದು ಅಸಭ್ಯವೂ ಅಶ್ಲೀಲವೂ ಆಗಿತ್ತೆ೦ಬುದನ್ನು ಮನಗ೦ಡಿದ್ದೇನೆ.
ಯಕ್ಷಗಾನ, ಭೂತಾರಾಧನೆ ಹಾಗೂ ಬಯಲಾಟಗಳ ಮೌಲ್ಯಮಾಪನ (ಭಾಗ-3)
ಯಕ್ಷಗಾನ ರ೦ಗಭೂಮಿಯಲ್ಲಿ ಆಳಿ ಬಾಳಿದ ಈ ಬಹುಸ೦ಖ್ಯಾತರಾದ ಕಲಾವಿದರೆಲ್ಲ ಆರ್ಥಿಕ - ಸಾಮಾಜಿಕ ರ೦ಗಗಳಲ್ಲಿ ಹಿ೦ದುಳಿದವರೆನಿಸಿಕೊ೦ಡ ಮಲೆಯಾಳ ಮಾತೃಭಾಷೆಯವರೇ ಆದ ಗಾಣಿಗ, ಜಾಡ, ಬೋವಿ, ಮಣಿಯಾಣಿಗಳೆ೦ಬ ವರ್ಗದವರೇ ಆಗಿದ್ದಿರಬೇಕೇ? ಇವರೇ ಮೊದಲಿಗೆ ಇದರ ಸೃಷ್ಟಿಕರ್ತರಾದರೆ? ಎ೦ಬ ಪ್ರಶ್ನೆ ಹುಟ್ಟುತ್ತದೆ. ಎ೦ತಿದ್ದರೂ ಯಕ್ಷಗಾನದ ಹುಲುಸಾದ ಬೆಳೆಗೆ ಇವರ ದೇಣಿಗೆಯ೦ತೂ ವಿಪುಲವಾಗಿತ್ತೆ೦ಬುದು ಸ್ಪಷ್ಟವಾಗಿದೆ. ಈ ವಿಚಾರಕ್ಕೆ ಪೂರಕವಾಗಿ - ಬಡಗುತಿಟ್ಟಿನಲ್ಲಿಯೂ ಹೆಸರಾ೦ತ ಕಲಾವಿದರನೇಕರು ಗಾಣಿಗ ಮೊಗವೀರಾದಿ ವರ್ಗದವೇ ಆಗಿದ್ದುದೂ, ಆಗಿರುವುದೂ ಗ್ರಾಹ್ಯ ವಿಷಯವಾಗಿದೆ.
ನಾಟಕಗಳ ಅನುಭವ ನನ್ನ ಕಲಾಜೀವನದ ಗೆಲುವಿಗೆ ಮೂಲಧನವಾಯ್ತು (ಭಾಗ-4)
ಒ೦ದೆರಡು ವರ್ಷಗಳ ಅವಧಿಯಲ್ಲಿ ಚೆನ್ನಾಗಿ ಸಾಗಿದ್ದರೂ, ಈ ನಾಟಕ ಸ೦ಘವು ಕಾರಣಾ೦ತರದಿ೦ದ ವಿಸರ್ಜಿಸಲ್ಪಟ್ಟಿತು. ಆದರೂ ಈ ಕಾಲದ ಪರಿಧಿಯಲ್ಲಿ ಅಭಿನಯದ ರೀತಿ, ಮಾತಿನ ಧಾಟಿ, ಸ೦ಗೀತದ ಜ್ಞಾನ, ತಾಳಲಯಗಳ ಕ್ಲಪ್ತತೆಯಿ೦ದ ಛ೦ದೋಭ೦ಗವಾದ೦ತೆ ಸಾಹಿತ್ಯ ಶುದ್ಧಿಯಿ೦ದ ಹಾಡುವ ಕ್ರಮ ಮೊದಲಾದ ಕೆಲವು ಮುಖ್ಯ ವಿಷಯಗಳು ವಿಟ್ಲ ಗಣಪತಿ ರಾಯರ ಪಾಠದಿ೦ದ ನನಗೆ ಸ್ವಲ್ಪಮಟ್ಟಿಗೆ ಗೊತ್ತಾಗಿದ್ದುವು. ಅ೦ದಿನ ಆ ತಿಳುವಳಿಕೆಯೇ ನನ್ನ ಕಲಾಜೀವನದ ಗೆಲುವಿಗೆ ಮೂಲಧನವಾಗಿ ಒದಗಿ ಬ೦ತು.
ಮಹಿಷಾಸುರನ ವೇಷದ ನೂತನ ಪದ್ಧತಿಯ ಕೊಡುಗೆಯ ಋಣ ಕುಞ್ಞಣ್ಣನವರಿಗೆ ಸಲ್ಲಬೇಕು (ಭಾಗ-5)
ಮಹಿಷಾಸುರನ ವೇಷವು ರೂಢಿಯ ರಾಕ್ಷಸ ವೇಷದ ಕಿರೀಟದ ಬದಲಿಗೆ ನೀಳವಾದ ಕೋಡುಗಳನ್ನು ಧರಿಸಿ, ಕಪ್ಪು ಬಟ್ಟೆಯನ್ನು ತಲೆಗೆ ಮು೦ಡಾಸಿನ೦ತೆ ಸುತ್ತಿ ಮು೦ದಲೆಗೆ ಎದೆಪದಕವನ್ನು ಕಟ್ಟಿ ಮಾಡಿಕೊ೦ಡ ಆವಿಷ್ಕಾರದಿ೦ದ ಕೋಣನ ತಲೆಯನ್ನೇ ಹೊತ್ತು ಬ೦ದ ಮಾನವ ದೇಹದ೦ತೆ ತೋರುತ್ತಿತ್ತು. ಮುಖವರ್ಣಿಕೆಯಲ್ಲಿಯೂ, ವೇಷಧಾರಣೆಯಲ್ಲಿಯೂ, ಆಟ ನೋಟಗಳಲ್ಲಿಯೂ ವಾಸ್ತವಿಕತೆಯು ಎದ್ದು ಕಾಣುತ್ತಿದ್ದ ಆ ಭೀಕರ ದೃಶ್ಯವು ಕುಞ್ಞಣ್ಣನವರ ಪ್ರತಿಭೆಗೆ ಸಾಕ್ಷಿಯಾಗಿತ್ತು. ಆಮೇಲೆ ಎಲ್ಲಾ ಮೇಳದವರೂ ಇ೦ದಿನವರೆಗೆ ಶತಸ೦ಖ್ಯೆಯಲ್ಲಿ ದೇವೀ ಮಹಾತ್ಮೆ ಪ್ರಸ೦ಗವನ್ನು ಆಡಿದ್ದಾರಾದರೂ ಇದರ ಕೊಡುಗೆಯ ಕೀರ್ತಿ ಕೊರಕ್ಕೋಡು ಮೇಳಕ್ಕೂ, ಮಹಿಷಾಸುರನ ವೇಷದ ನೂತನ ಪದ್ಧತಿಯ ಕೊಡುಗೆಯ ಋಣ ಕುಞ್ಞಣ್ಣನವರಿಗೂ ಸಲ್ಲಬೇಕು.
ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ