ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ತ್ರಿಕಣ್ಣೇಶ್ವರಿ ಪ್ರಶಸ್ತಿ ಪುರಸ್ಕ್ರತ ಹಿರಿಯ ಸ್ತ್ರೀವೇಷದಾರಿ ಮಾರ್ಗೋಳಿ ಗೋವಿಂದ ಸೇರೆಗಾರ್

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಬುಧವಾರ, ಜುಲೈ 2 , 2014

ಬಡಗುತಿಟ್ಟು ಯಕ್ಷಗಾನದ ಅಗ್ರಪಂಕ್ತಿಯ ಸ್ತ್ರೀವೇಷದಾರಿಗಳಲ್ಲಿ ಹಿರಿಯ ಸ್ತ್ರೀ ಪಾತ್ರಧಾರಿ ಮಾರ್ಗೋಳಿಯವರು ಒಬ್ಬರು. ಬಡಗುತಿಟ್ಟು ಸಂಪ್ರದಾಯದ ಸ್ತ್ರೀವೇಷಗಳ ಪ್ರಾತಿನಿಧಿಕ ಕಲಾವಿದರೆಂದು ಗುರುತಿಸಲ್ಪಟ್ಟ ಇವರು ಯಕ್ಷಗಾನಕ್ಕೆ ಸಂಬಂದಪಟ್ಟ ಗೋಷ್ಟಿ, ವಿಚಾರ ವಿನಿಮಯಗಳಲ್ಲಿ ಅನಿವಾರ್ಯ ಸಂಪನ್ಮೂಲ ವ್ಯಕ್ತಿ. ಸುಮಾರು 85 ವರ್ಷದ ಹಿರಿಯರು ಈಗಲೂ ಯಕ್ಷಗಾನ ಸ೦ಬ೦ಧಿ ಕಾರ್ಯಕ್ರಮದಲ್ಲಿ ಭಾಗವಹಿಸುದಲ್ಲದೇ ಅನೇಕ ಶಿಷ್ಯರಿಗೆ ಹೆಜ್ಜೆಗಾರಿಕೆ ಕಲಿಸುತಿದ್ದಾರೆ.

ಕುಂದಾಪುರ ತಾಲೂಕು ಬಸ್ರೂರು ಸಮೀಪ ಮಾರ್ಗೋಳಿ ಎಂಬಲ್ಲಿ 1927ರಂದು ನರಸಿಂಹ ಸೇರೆಗಾರ್ ಹಾಗೂ ಸುಬ್ಬಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಸೇರೆಗಾರರು ತನ್ನ ಸ್ತ್ರೀ ಸಹಜ ಆಳಂಗ ಶರೀರ-ಶಾರೀರ, ಒನಪು ವೈಯಾರದಿಂದ ಸ್ವರ ಮತ್ತು ಅಪೂರ್ವ ಶ್ರುತಿಬದ್ದತೆಯಿಂದ ಬಹುಬೇಗ ಅದ್ವೀತೀಯ ಸ್ತ್ರೀ ವೇಷಧಾರಿಯಾಗಿ ಮೂಡಿಬಂದರು. ತಮ್ಮ 13ನೇ ವಯಸ್ಸಿನಲ್ಲಿ ಆಗ ಅಪ್ರತಿಮ ಸ್ತ್ರೀವೇಷದಾರಿ ಕೊಕ್ಕರ್ಣೆ ನರಸಿಂಹ ಕಾಮತರ ಶಿಷ್ಯತ್ವ ಸ್ವೀಕರಿಸಿ ಅವರಿಂದ ಹೆಜ್ಜೆಗಾರಿಕೆ ಕಲಿತರು. ಕಾಮತರ ಶಶಿಪ್ರಭೆ ಪಾತ್ರದಿಂದ ಪ್ರೇರೇಪಿತರಾದ ಸೇರೆಗಾರರ ಶಶಿಪ್ರಭೆ ಪಾತ್ರ ಮಂದೆ ಯಕ್ಷಗಾನ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿತು.

ಶ್ರೀ ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದ ಇವರು ಅಲ್ಲಿಯೇ ನರಸಿಂಹ ಕಾಮತರ ಗರಡಿಯಲ್ಲಿ ಪಳಗಿ ಉತ್ತಮ ಸ್ತ್ರೀ ವೇಷದಾರಿಯಾಗಿ ಮೂಡಿಬಂದರು. ಬಳಿಕ ಎಂ. ಎಂ. ಹೆಗ್ಡೆಯವರ ಮಾರಣಕಟ್ಟೆ ಮೇಳ ಸೇರಿದ ಇವರಿಗೆ ಗುರು ವೀರಭದ್ರ ನಾಯಕರ ಶಿಷ್ಯತ್ವ ಲಬಿಸಿತು. ಮರವಂತೆ ನರಸಿಂಹ ದಾಸರು ವೀರಭದ್ರ ನಾಯಕರು, ಉಡುಪಿ ಬಸವ, ಮೊಳಹಳ್ಳಿ ಹೆರಿಯ, ಮುಂತಾದ ಹಿರಿಯರ ಒಡನಾಟ ದೊರೆಯಿತು. ರಂಗಸ್ಥಳವೇ ಪಾಠ ಶಾಲೆಯಾಯಿತು. ಮಂದಾರ್ತಿ ಮೇಳದಲ್ಲಿ ಹಾರಾಡಿ ನಾರಾಯಣ ಗಾಣಿಗರ ಸ್ತ್ರೀವೇಷಕ್ಕೆ ಮಾರಣಕಟ್ಟೆ ಮೇಳದಲ್ಲಿ ಗೋವಿಂದ ಸೇರೆಗಾರರ ಸ್ತ್ರೀವೇಷ ಜೋಡಾಟದಲ್ಲಿ ಪ್ರತಿಸ್ಪರ್ದಿಯಾಗಿರುತಿತ್ತು. ಬಳಿಕ ಸೌಕೂರು ಅಮೃತೇಶ್ವರಿ, ಪೆರ್ಡೂರು ಇಡಗುಂಜಿ ಸಾಲಿಗ್ರಾಮ ಕಮಲಶಿಲೆ ಮುಂತಾದ ಮೇಳಗಳಲ್ಲಿ ಸುಮಾರು 50 ವರ್ಷ ಸೇವೆ ಸಲ್ಲಿಸಿದ್ದಾರೆ.

ವೀರಾವೇಷದ ಕಸೆಸ್ತ್ರೀವೇಷಗಳಲ್ಲಿ ವಿಶೇಷ ಹೆಸರು ಮಾಡಿದ ಇವರ ವೀರಮಣಿ ಕಾಳಗದ ಮದನಾಕ್ಷಿ, ಶಶಿಪ್ರಭೆ, ಬ್ರಮರಕುಂತಲೆ, ಮೀನಾಕ್ಷಿ, ಪ್ರಮೀಳೆ ಪದ್ಮಗಂದಿನಿ ಮುಂತಾದ ಪಾತ್ರಗಳಲ್ಲಿ ಇವರನ್ನು ಸರಿಗಟ್ಟುವವರಿಲ್ಲ. ಮೈರಾವಣ ಕಾಳಗದ ದುರ್ದುಂಡಿ, ಚಿತ್ರಾಂಗದೆ, ಕಯಾದು, ಸೀತೆ ಮುಂತಾದ ಪಾತ್ರಗಳು ಇವರಿಗೆ ವಿಶೇಷ ಹೆಸರು ತಂದುಕೊಟ್ಟ ಪಾತ್ರಗಳು. ತೆರೆಕುಣಿತ, ರಥಕುಣಿತ, ಪ್ರಯಾಣ ಕುಣಿತಗಳಲ್ಲಿನ ಚುರುಕುತನ, ವೈವಿದ್ಯತೆ, ಠೀವಿ ಝೇಂಕಾರಗಳನ್ನು ಇವರ ಕಸೆವೇಷಗಳಲ್ಲಿ ವಿಶೇಷವಾಗಿ ಗಮನಿಸಬಹುದಾಗಿದೆ.

ಪುರುಷವೇಷವನ್ನೂ ಮಾಡಬಲ್ಲ ಇವರು ಹೊಸ ಪ್ರಸಂಗದಲ್ಲೂ ತನ್ನತನ ಮೆರೆದಿದ್ದಾರೆ ಹೊಸ ಸಾಮಾಜಿಕ ಪ್ರಸಂಗವಾದ. ಯಕ್ಷಲೋಕ ವಿಜಯದ ವಾಸಂತಿ ಇವರಿಗೆ ಹೆಸರುತಂದುಕೊಟ್ಟ ಪಾತ್ರ. ಹಲವಾರು ಶಿಷ್ಯರನ್ನು ತಿದ್ದಿದ ಇವರ ಶಿಷ್ಯರಲ್ಲಿ ದಿ. ನೀಲಾವರ ಮಹಾಬಲ ಶೆಟ್ಟಿ. ಕಕ್ಕುಂಜೆ ಅನಂತ ಕುಲಾಲ್. ಐರ್ ಬೈಲು ಆನಂದ ಶೆಟ್ಟಿ, ಅರಾಟೆ ಮಂಜುನಾಥ, ಉಪ್ಪಿನಕುದ್ರು ಆನಂದ, ದಯಾನಂದ ನಾಗೂರ್ ಪ್ರಮುಖರು. ಉಡುಪಿ ಯಕ್ಷಗಾನ ಕಲಾರಂಗದ ಡಾ. ಬಿ. ಬಿ. ಶೆಟ್ಟಿ ಪ್ರಶಸ್ತಿ, ಕುಂದಾಪುರ ಎಂ. ಎಂ. ಹೆಗಡೆ ಪ್ರಶಸ್ತಿ ಮಂದಾರ್ತಿ ಕ್ಷೇತ್ರದ ಸನ್ಮಾನ ಸಹಿತ ಹಲವಾರು ಸನ್ಮಾನದಿಂದ ಪುರಸ್ಕ್ರತರಾದ ಸೇರೆಗಾರರಿ ತ್ರಿಕಣ್ಣೇಶ್ವರಿ ಪ್ರಶಸ್ತಿ ಯೋಗ್ಯವಾಗಿಯೇ ಸಂದಿದೆ.

ಮಾರ್ಗೋಳಿ ಗೋವಿಂದ ಸೇರೆಗಾರ್
ಜನನ : 1927
ಜನನ ಸ್ಥಳ : ಮಾರ್ಗೋಳಿ, ಬಸ್ರೂರು, ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಅಪ್ರತಿಮ ಸ್ತ್ರೀವೇಷಧಾರಿಯಾಗಿ 50 ವರ್ಷಗಳ ಕಾಲ ಮಂದಾರ್ತಿ, ಸೌಕೂರು, ಅಮೃತೇಶ್ವರಿ, ಪೆರ್ಡೂರು, ಇಡಗುಂಜಿ, ಸಾಲಿಗ್ರಾಮ, ಕಮಲಶಿಲೆ ಮೇಳಗಳಲ್ಲಿ ಕಲಾಸೇವೆ.
ಪ್ರಶಸ್ತಿಗಳು:
  • ಉಡುಪಿ ಯಕ್ಷಗಾನ ಕಲಾರಂಗದ ಡಾ. ಬಿ. ಬಿ. ಶೆಟ್ಟಿ ಪ್ರಶಸ್ತಿ
  • ಕುಂದಾಪುರ ಎಂ. ಎಂ. ಹೆಗಡೆ ಪ್ರಶಸ್ತಿ ಮಂದಾರ್ತಿ ಕ್ಷೇತ್ರದ ಸನ್ಮಾನ
  • ತ್ರಿಕಣ್ಣೇಶ್ವರಿ ಪ್ರಶಸ್ತಿ
ಶ್ರೀ ಗಣೇಶ ದುರ್ಗಾ ಚಾರಿಟೆಬಲ್ ಟ್ರಸ್ಟ್ (ರಿ) ಉಡುಪಿ ಮತ್ತು ತ್ರಿಕಣ್ಣೇಶ್ವರಿ ಮಾಸ ಪತ್ರಿಕೆ ಉಡುಪಿ ಜಂಟಿಯಾಗಿ ಯಕ್ಷಗಾನ ಕಲಾವಿದರಿಗೆ ನೀಡುವ ಪ್ರತಿಷ್ಟಿತ ತ್ರಿಕಣ್ಣೇಶ್ವರಿ ಪ್ರಶಸ್ತಿಯನ್ನು ಈ ಬಾರಿ ಮಟಪಾಡಿ ಶೈಲಿಯ ಬಡಗುತಿಟ್ಟಿನ ಪ್ರಾತಿನಿಧಿಕ ಕಲಾವಿದ ಮಾರ್ಗೋಳಿ ಗೋವಿಂದ ಸೇರೆಗಾರರಿಗೆ ನೀಡಲಾಗುತ್ತದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜುಲೈ 12ರಂದು ಕು೦ಭಾಶಿಯ ವಿನಾಯಕ ದೇವಸ್ಥಾನದ ಕಲಾಭವನದಲ್ಲಿ ನೆರವೇರಲಿದೆ.




Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ